ಧರ್ಮ ಭೂಮಿ ಎನಿಸಿದ ಭಾರತಖಂಡದ ಉತರ ಭಾಗದಲ್ಲಿ ಕೋಶಲವೆಂಬ ದೇಶವಿತು. ಅದು ಸುಖ ಶಾಂತಿಯ ತಾವರಗಿತು. ಸುಜನ ಜನಪದರ ಬಿಡಗಿತು. ಕಲೆ, ಸಾಹಿತ್ಯ, ಸಂಗೀತಗಳ ಸಂಗಮವಾಗಿತ್ತು. ಧರ್ಮಕಾರ್ಯಗಳು ಯಾವುದೇ ಅಡೆತಡೆಗಳಿಲದೇ ನಿರಂತರವಾಗಿ ನೆಡೆಯುತಿದು ಅಲ್ಲಿನ ಜನರು ಸುಸಂಕೃತರಾಗಿದ್ದರು. ದೇಶ ಪ್ರೇಮ ಅವ್ರಲ್ಲಿ ತುಂಬಿ ತುಳುಕಡಿತಿತ್ತು
ಅಯೋಧ್ಯ ನಗರ– Ayodya(saketa)
ಕೋಸಲದೇಶದ ಕೀರ್ತಿ ವಿಷವ್ಯಾಪಿಯಾಗಿತು. ಇಂತಹ ಅಪೂವ್ರ ದೇಶಕ್ಕೆ ಅಯೋಧ್ಯ ನಗರ ರಾಜಧಾನಿಯಾಗಿತ್ತು. ಸರಯೂ ನದಿ ತೀರದಲ್ಲಿದ್ದಆ ನಗರ ತುಂಬ ರಮಣೀಯವಾಗಿತ್ತು. ಅದನ್ನು ಸೂರ್ಯವಂಶೋತ್ಪನ್ನನಾದ ಮನುಚಕ್ರವರ್ಥಿಯು ನಿರ್ಮಾಣ ಮಾಡಿಸಿದ್ದನು. ಒಂದು ನೂರಾಇಪ್ಪತು ಮೈಲಿ ಉದ್ದವಾಗಿಯೂ ಇತ್ತು. ಮುಗಿಲು ಮುಟ್ಟುವ ಸುಂದರವಾದ ಮನೆಗಳು. ಆಪೂರ್ವದ ರಾಜಬೀದಿಗಳು. ಸರ್ವಗುಣ ಸಂಪನ್ನರಾದ ಪ್ರಜೆಗಳಿಂದ ಕೂಡಿತು ಆ ಮಹಾನಗರ ಅಯೋಧ್ಯ ಇಂದ್ರನ ಅಮರಾವತಿಯಂತೆ ಕಂಗೊಳಿಸಿತಿತು

ಧಶರಥ– Dhashartha King
ಇಂತಹ ಮಾನವಕುಲಾವತಂಸ ದಶರಥ ಮಹಾರಾಜಾನು ಧೊರೆಯಾಗಿದನು. ಈತನು ಇಕ್ಷ್ವಾಕುವಮಶದವನು. ಶೂರನೂ ನೆರವು ಇಲ್ಲದೇ ಏಕಾಂಗಿಯಾಗಿ ಹತ್ತು ಸಾವಿರ ವೀರರೊಡನೆ ಯುದ್ಧ ಮಾಡಬಲ್ಲವನಾಗಿದನು.
ಮಹಾರಾಜಾ ದಶರಥನಿಗೆ ಮೂವರು ಮಡದಿಯರು ಅವರಲ್ಲಿ ದೇವಿ ಕೌಶಲ್ಯ ಹಿರಿಯವಳುದೇವಿ ಸುಮಿತ್ರೆ ಎರಡನೇಯವಳು. ದೇವಿ ಕೈಕೇಯಿ ಕೊನೆಯವಳು. ಮೂವರು ರಾಣಿಯವರು ಸರ್ವಗುಣ ಭೂಷಿತೆಯಾರಾಗಿದ್ದರು ಆದರೆ ಮಕ್ಕಳಾಗದೇ ಹೋಧದು ಒಂದು ದೊಡ್ಡ ಚಿಂತೆಯಾಗಿತು. ಮೂವರು ರಾಣಿಯರು ಹಾಗು ಮಹಾರಾಜಾ ದಶರಥ ದೇವರ ಮೊರೆ ಒದರು. ವ್ರತಗಳನ್ನು ಮಾಡಿದರು ಆದರೂ ಬಯಕೆ ಕೈಗೂಡಲಿಲ್ಲ. ಇಡೀ ಅರಮನೆಯೇ ದುಃಖದಲ್ಲಿ ಮುಳಿಗಿತು
ಪುತ್ರಕಾಮೇಷ್ಠಿ ಯಾಗ–
ವಯಸ್ಸು ಹೆಚ್ಚಿದಂತೆಲ್ಲ ಪುತ್ರವ್ಯಾಮೋಹ ಅತಿಯಾಗತೊಡಗಿತು. ಆಗ ರಾಜ ಧಶರತನಿಗೆ ದೈವಾನುಗ್ರಹದಿಂದಲಾದರೂ ಏಕೆ ಪಡಯಬಾರದೆಂದು ಎಂದೆನಿಸುತು. ಸಂತಹ ಪ್ರಾಪ್ತಿಗಾಗಿ ಅಶ್ವಮೇಧ ಯಾಗವನ್ನು ಮಾಡಲು ತೀರ್ಮಾನಿಸಿದನು . ಈ ಯಾಗವು ಮುಗಿದ ಕೂಡಲೇ ಧಶರಥ ಮಹಾರಾಜರು ಪುತ್ರಕಾಮೇಷ್ಟಿಯಾಗವನ್ನು ಮಾಡಲು ಬಯಸಿದನು .
ಸಕಲವೇದ ಪಾರಂಗತರವಾದ ಋಷ್ಯಶೃಂಗರು ಆ ಯಾಗಧಾ ಕಾರ್ಯವನ್ನು ನಿರ್ವಹಿಸಲು ಮುಂದಾಳತ್ವ ವಹಿಸಿದರ

ಮಹಾರಾಜಾ ಧಶರತನು ಪತ್ನಿಯರೊಡಗೂಡಿ ಯಜ್ಞಕಾರ್ಯವನ್ನು ಮಾಡಲು ಕಂಕಣಬದ್ಧರಾಗಿ ನಿಂತನು. ಶುಭನಕ್ಷತ್ರ, ಶುಭಯೋಗ, ಶುಭಕರಣ, ಶುಭ ತಿಥಿಗಳು ಸೇರಿದ ಶುಭದಿನದಂದು ಯಶಶ್ವಿಯಾಗಿ ಮಹಾಮುನಿಗಳ ನಿರ್ದೇಶನದಂತೆ ಮುಗಿಸಿದನು. ಋಷ್ಯಶೃಂಗರ ಆಶಯಕೆ ಎಳ್ಳಷ್ಟು ಬಂಗ ಬಾರದಂತೆ ಯಜ್ಞಕಾರ್ಯ ಅರ್ಥಪೂರ್ಣವಾಗಿ ಜರುಗಿತು.
ಅಗ್ನಿದೇವರ ಪ್ರಸಾದ
ಯಜ್ಞಕಾರ್ಯ ಜರುಗಿದ ನಂತರ ದೇವತೆಗಳು, ಗಂಧರ್ವರು, ಸಿದ್ದರು, ದೇವರ್ಷಿಗಳು ಎಲ್ಲರೂ ಸಂತೃಪ್ತರಾದರು. ಪೂರ್ಣಾಹುತಿಯೂ ಆಯಿತು. ಅನಂತರ ಯಜ್ಞಕುಂಡದ ಮದ್ಯದಿಂದ ದಿವ್ಯ ಪ್ರಭಾಮಂಡಲದಿಂದ ಪ್ರಜ್ವಲಿಸುವ ಅಗ್ನಿದೇವನು ಪ್ರತ್ಯಕ್ಷನಾಗಿ ನಿಂತನು. ದಶರತನ್ನು ಕುರಿತು ” ರಾಜನೇ , ಇದು ದೇವನಿರ್ಮಿತವಾದ ಪಾಯಸ. ನೀನು ನಿರ್ಮಲಚಿತನಾಗಿ ಭಕ್ತಿಭಾವದಿಂದ ಪುತ್ರಕಾಮೇಷ್ಠಿಯಾಗದ ಪ್ರತಿಫಲವಾಗಿ ದೊರೆತಿದೆ. ಈ ದಿವ್ಯವಾದ ಪಾಯಸವನ್ನು ನಿನ್ನ ಪತ್ನಿಯವರಿಗೆ ನೀಡು. ಈ ದಿವ್ಯ ಪಾಯಸದ ಪ್ರಭಾವದಿಂದಾಗಿ ನಿನ್ನ ಮನದಾಸೆ ಕೈಗೂಡುತಹದೇ. ಮಹಾನ್ ತೇಜಸ್ವಿಗಳಾದ ಪುತ್ರರು ನಿನ್ನಗೆ ಜನಿಸುತ್ತಾರೆ” ಎಂದು ಒಲುಮೆಯಿಂದ ಹೇಳಿ, ಕೈಯಲಿದ ಚಿನ್ನದ ಪತ್ರಯನ್ನು ದಶರಥನ ಕೈಗಿಟ್ಟು ಹರಸಿದನು
ಶ್ರೀ ರಾಮನ ಜನನ
ರಾಜ ಧಶರಥನು ಭಕ್ತಿಭಾವದಿಂದ ಅಗ್ನಿದೇವನಿಗೆ ತೆಲೆಬಾಗಿದನು. ಹರ್ಷಮಯವಾಗಿ ಪಾಯಸವಿದ ಸುವರ್ಣ ಪಾತ್ರೆಯನ್ನು ಸ್ವೀಕರಿಸಿದನು. ಕ್ಸಣಾರ್ದದಲ್ಲಿ ಅಗ್ನಿದೇವನು ಮಾಯವಾದನು. ಆಕಸ್ಮಿಕವಾಗಿ ಅಪಾರ ಸಂಪತು ಲಭಿಸಿದಾಗ ಕಡು ಬಡವನಿಗೆ ಆಗುವ ಸಂತೋಷ ರಾಜ ದಶರಥನಿಗೆ ಆಯಿತು. ಸುವರ್ಣ ಪಾತ್ರೆಯಲಿದ ಪಾಯಸವನ್ನು ಎರಡು ಭಾಗ ಮಾಡಿ ಒಂದು ಭಾಗ ಹಿರಿಯಅರಸಿ ಕೌಸಲ್ಯಾದೇವಿಗೆ ನೀಡಿ ಸಂತಾನಕೆ ಕಾರಣವಾದ ಈ ಪಾಯಸವನ್ನು ಭಕ್ತಿಯಿಂದ ಸ್ವೀಕರಿಸುವಳಾಗು ಎಂದು ರಾಜ ಹೇಳಿದನು
ಉಳಿದ ಒಂದು ಭಾಗದಲ್ಲಿ ಎರಡು ಬಾಗಮಾಡಿ . ಒಂದು ಭಾಗವನ್ನು ಸುಮಿತ್ರಾ ದೇವಿಗೆ ನೀಡಿದನು. ಉಳಿದ ಒಂದು ಭಾಗವನ್ನು ಕಿರಿಯ ರಾಣಿ ಕೈಕೇದೇವಿಗೆ ನೀಡಿದನು. ಪತಿರಾಯನು ನೀಡಿದ ಪಾಯಸವನ್ನು ಭಕ್ತಿನಿಂದ ಸ್ವೀಕರಿಸಿದರು .
ಮೂವರು ರಾಣಿಯರು ಗರ್ಭವತಿಯರಾದರು. ರಾಜ ಧಶರತನು ಸುಖಸಾಗರದಲಿ ಮುಳಿಗಿದನು ಋತುಗಳು ಉರಿಳಿದವು. ಚೈತ್ರ ಶುದ್ಧ ನವಮಿಯಂದು, ಪುನಾವಾರಸು ನಕ್ಷತ್ರದಲ್ಲಿ, ಇಕ್ಷ್ವಾಕುಲದ ನಂದಾದೀಪದಂತೆ ದೇವಿ ಕೊಸಲ್ಯೆ ಸುಪಾತ್ರನಿಗೆ ಜನ್ಮ ಕೊಟ್ಟಳು. ಆ ಮಗುವೇ ಮಹಾವಿಷ್ಣುವಿನ ಏಳನೇ ಅವತಾರವಾದ ಶ್ರೀ ರಾಮ

ಇಡೀ ಅಯೋಧ್ಯಾನಗರಿ ಆನಂದ ಸಾಗರದಲ್ಲಿ ಮುಳುಗಿತು. ಹಾಗೆ ಇನ್ನುಳಿದ ಇಬ್ಬರು ರಾಣಿಯರಾದ ಕೈಕೆ ಭರತನಿಗೆ ಜನ್ಮನೀಡಿದಳು. ಅನಂತರ ಸುಮಿತ್ರೆಯು ಲಕ್ಷ್ಮಣ ಮತ್ತು ಶತ್ರುಜ್ಞ ಎಂಬ ಅವಳಿ ಮಕ್ಕಳಿಗೆ ಜನ್ಮ ನೀಡಿದಳು
ಶ್ರೀ ರಾಮ, ಭಾರತ, ಲಕ್ಷ್ಮಣ, ಶತ್ರುಜ್ಞ ಜನಿಸಿದ ಸಂದರ್ಭದಲ್ಲಿ ದೇವಾ ದುಂಬಿಗಳು ಮೊಳಗಿದವು ಅಯೋಧ್ಯ ನಗರದ ತುಂಬೆಲ್ಲ ಹಬ್ಬಗಳು ಸಡಗರ ಸಂಭ್ರಮ ಜೋರಾಗಿ ಜರಗಿದವು